​ತುಳಸಿ ಪೂಜೆ:

ತುಳಸಿ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯೋ, ಅಷ್ಟೇ ಪೌರಾಣಿಕ ಮಹತ್ವವನ್ನೂ ಒಳಗೊಂಡಿದೆ. ವಿಷ್ಣುಪ್ರಿಯ ತುಳಸಿಯನ್ನು ಪೂಜಿಸುವುದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ. ಸನಾತನ ಧರ್ಮದಲ್ಲಿ ತುಳಸಿಯನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಪ್ರತಿದಿನ ಮುಂಜಾನೆ ತುಳಸಿಯ ನೀರನ್ನು ಅರ್ಪಿಸುವುದರಿಂದ ಜೀವನದ ಎಲ್ಲಾ ತೊಂದರೆಗಳಿಂದ ಮುಕ್ತಿ ಸಿಗುತ್ತದೆ ಮತ್ತು ಲಕ್ಷ್ಮಿ ದೇವಿಯ ಕೃಪೆಯಿಂದ ಆರ್ಥಿಕ ಮುಗ್ಗಟ್ಟು ನಿವಾರಣೆಯಾಗುತ್ತದೆ.

ತುಳಸಿಗೆ ನೀರನ್ನು ಅರ್ಪಿಸಿ:

ಪ್ರತಿದಿನ ಬೆಳಿಗ್ಗೆ ತುಳಸಿಗೆ ನೀರನ್ನು ಅರ್ಪಿಸಿ ಮತ್ತು ನೀರನ್ನು ಅರ್ಪಿಸುವಾಗ ಈ ಮಂತ್ರವನ್ನು ಜಪಿಸಿ - ಮಹಾಪ್ರಸಾದ ಜನನಿ, ಸರ್ವ ಸೌಭಾಗ್ಯವರ್ಧಿನಿ, ಆಧಿ ವ್ಯಾಧಿ ಹರ ನಿತ್ಯಂ, ತುಳಸಿ ತ್ವಂ ನಮೋಸ್ತುತೇ. ಈ ಪಠಣದಿಂದ ಅದೃಷ್ಟ, ಸಂತಾನಭಾಗ್ಯ, ವ್ಯಾಪಾರದಲ್ಲಿ ಪ್ರಗತಿ ಮತ್ತು ಸುಖೀ ವೈವಾಹಿಕ ಜೀವನ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.

ತುಳಸಿಯ ಬಳಿ ತುಪ್ಪದ ದೀಪವನ್ನು ಹಚ್ಚಿ:

ಪ್ರದೋಷ ಕಾಲದಲ್ಲಿ ಸಂಜೆ ಪೂಜೆಯ ನಂತರ ತುಳಸಿ ಗಿಡದ ಕೆಳಗೆ ತುಪ್ಪದ ದೀಪವನ್ನು ಹಚ್ಚಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಹಾಗೂ ಇದರಿಂದ ನಿಮ್ಮ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು ಇರುತ್ತದೆ.

ಇದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ:

ತುಳಸಿ ಪೂಜೆಯ ನಂತರ, ನೀರನ್ನು ಅರ್ಪಿಸುವ ಅದೇ ಪಾತ್ರೆಯಲ್ಲಿ ತುಳಸಿ ಎಲೆಗಳನ್ನು ಹಾಕಿ. ಅದನ್ನು ಮನೆಯಲ್ಲೆಲ್ಲಾ ಸಿಂಪಡಿಸಿ. ಇದು ಮನೆಯ ಸಮೃದ್ಧಿಯನ್ನು ಕಾಪಾಡುತ್ತದೆ ಎಂದು ನಂಬಲಾಗಿದೆ. ಇದನ್ನು ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು ಮನೆಗೆ ಪ್ರವೇಶಿಸುವುದಿಲ್ಲ ಮತ್ತು ಮನೆಯಲ್ಲಿ ಸಮೃದ್ಧಿ ಬರುತ್ತದೆ.

​ಇದನ್ನು ಮಾಡಬೇಡಿ:

ಭಾನುವಾರದಂದು ತುಳಸಿಗೆ ನೀರನ್ನು ಅರ್ಪಿಸಬೇಡಿ. ನಮಸ್ಕರಿಸದೆ ತುಳಸಿ ಎಲೆಗಳನ್ನು ಕೀಳಬೇಡಿ. ಸಂಜೆ ತುಳಸಿಯನ್ನು ಮುಟ್ಟಬಾರದು, ಇದರಿಂದ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಇದರಿಂದಾಗಿ ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು.